ಭೂಕಂಪದ ಬದುಕು

ಬದುಕುವುದು ಭೀಕರವೆಂದರೆ
ನಿಜವೆನ್ನೋಣ; ಆದರೆ
ಸಾವೂ ಭೀಕರವಾಗಬೇಕೆ?
ಕರೆದುಕೊಂಡಂತೆ ಸೀತೆಯನ್ನು
ಭೂಮಿ ಅಮ್ಮನಾಗಬಾರದೇಕೆ?
ಸಾಯಿಸುವುದಕ್ಕೂ ಸಿಟ್ಟಾಗಿ ಆಕೆ
ಕೆಂಡಮಂಡಲವಾಗಬೇಕೆ?

ಸಿಟ್ಟೆಂದರೆ ಎಂಥ ಸಿಟ್ಟು!
ಹಾವಂತೆ ಹರಿದಾಡಿದ ಗುಟ್ಟು
ಸಾವಿನ ಎಡೆ ಕೇಳುತ್ತ ಹೆಡೆಯತ್ತಿ
ಬುಸ್ಸೆಂದು ಬಿರುಕು ಬಿಟ್ಟಾಗ
ಅಂತಃಕರಣದ ಆಪೋಶನ
ವಿಷನರ್ತನ!

ಕುಣಿದ ಕಾಲ್ತುಳಿತಕ್ಕೆ
ನೆಲ ನೆತ್ತರ ಕಾರಿತು
ಕತ್ತಲೆಯಿಂದ ಬೆಳಕಿಗೆ
ಬೆಳಕಿನಿಂದ ಕತ್ತಲೆಗೆ
ಕಟ್ಟಿದ ಸೇತುವೆ
ಗಪ್ಪನೆ ಕುಸಿಯಿತು.
ಕಾಲನ ಜೊತೆ ಕಾಳಗವಾಡುತ್ತ
ಬೆವರಾಗಿ ಹರಿದ
ಕರಿಮೈ ಕಾಲುವೆ
ಬತ್ತಿಹೋಯಿತು.

ನಸುನಗೆಯ ಚಂದಿರ
ಚಿಂದಿಚಿಂದಿಯಾದ.
ಉರಿಗಣ್ಣ ಸೂರ್ಯ
ಸುಟ್ಟು ಕರಕಾದ
ಹಗಲು ರಾತ್ರಿಗಳಿಲ್ಲದ
ನೆಲದಲ್ಲಿ ಬಿಲಕ್ಕಾಗಿ
ಬಾಯ್ದೆರೆದ ಜೀವಗಳು
ಒಡೆದ ಗಡಿಗೆಯಲ್ಲಿ ನೀರು ಹೊತ್ತು
ದಾವರ ಹಿಂಗಿಸ ಹೊರಟ
ತುಂಬಿದ ಭಾವಗಳು.

ಭೂಕಂಪದ ಬದುಕಿನಲ್ಲಿ
ನಡುಗುತ್ತಿದೆ ಭಾರತ
ನೊಂದವರೇ ನಂದಾದೀಪವಾಗಿ
ಮುನ್ನಡೆಯುತ್ತದೆ ಖಂಡಿತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನೇ ಬಂದರೂ
Next post ಬಂಗಲೆಯ ಭಾಗ್ಯ

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys